CPIML Liberation Karnataka

CPIML Liberation Karnataka
CPIML LIBERATION KARNATAKA

ಶನಿವಾರ, ಜುಲೈ 30, 2016

ಎಂ ಎಲ್ ಅಪಡೇಟ್- ಸಿ ಪಿ ಐ ಎಂ ಎಲ್ ನ ಸಾಪ್ತಾಹಿಕ ವಾರ್ತಾ ಪತ್ರ. ಸಂಪುಟ: 19/ ಸಂಚಿಕೆ 31/ ಜುಲೈ 26- 1 ಆಗಸ್ಟ್ 2016

ಎಂ ಎಲ್ ಅಪಡೇಟ್ 

ಸಿ ಪಿ ಎಂ ಎಲ್ ಸಾಪ್ತಾಹಿಕ ವಾರ್ತಾ ಪತ್ರ.

ಸಂಪುಟ: 19/ ಸಂಚಿಕೆ 31/ ಜುಲೈ 26- 1 ಆಗಸ್ಟ್ 2016

----------------------------------------------

ತಮಿಳು ನಾಡಿನಲ್ಲಿ ಸಿ ಪಿ ಎಂ ಎಲ್ 

ಕಾರ್ಯಕರ್ತನ  ಶಿರಶ್ಚೇದನ

ಜಾತಿವಾದಿ - ಕೋಮುವಾದಿ ಸಂಘಟನೆಗಳ ದೌರ್ಜನ್ಯವನ್ನು ಎದುರಿಸಿ

ಗುಜರಾತ್ ನಲ್ಲಿ ಗೋರಕ್ಷಕ ದಾಂಧಲೆಕೋರರು ದಲಿತ ಯುವಕರನ್ನು ನಗ್ನಗೊಳಿಸಿ ಥಳಿಸುದದರ ವಿರುದ್ಧ ಇಡೀ ದೇಶ ಪ್ರತಿಭಟಿಸುತ್ತಿರುವಾಗ, ತಮಿಳುನಾಡಿನಲ್ಲಿ  ಜಾತಿವಾದಿ- ಕೋಮುವಾದಿ ಶಕ್ತಿಗಳು ನಡೆಸಿರುವ ಧಿಘ್ರಮೆ ಗೊಳಿಸುವ ಘಟನೆ ವರದಿಯಾಗಿದೆ. ದಲಿತ ಸಮುದಾಯ ವನ್ನಾರ್( ಧೋಭಿ) ಜಾತಿಗೆ ಸೇರಿದ ಸಿಪಿಐಎಂಎಲ್ ಕಾಮ್ರೇಡ್ ಮಾರಿಯಪ್ಪನ್ ಅವರನ್ನು ಶಿರಚ್ಛೇಧನ ಮಾಡಿದ್ದಾರೆ. ಇದನ್ನು ಮಾಡಿದವರು ಹಿಂದು ಮುನ್ನಣಿ ಗೆ ಸೇರಿದವರು. ಇದಕ್ಕೆ ಕಾರಣ- ಜಾತೀಯ ಕಟ್ಟುಪಾಡುಗಳನ್ನು ಪ್ರತಿಭಟಿಸಿದ್ದು.

2013 ರಲ್ಲಿ ಕಾಮ್ರೇಡ್ ಮಾರಿಯಪ್ಪನ್ ನಗರಪಾಲಿಕೆಯ ರಸ್ತೆಯಲ್ಲಿ ವನ್ನಾರ್ ಜಾತಿಯವರು ಶವಯಾತ್ರೆ ಮಾಡಲು ಅವಕಾಶ ನೀಡದಿದ್ದಾಕಾಗಿ ಹಿಂದು ಮುನ್ನಣಿಯ ಸದಸ್ಯರ ವಿರುದ್ಧ ದೂರಿತ್ತಿದ್ದನು. ಇದೇ ಜುಲೈ 20 ರಂದು ಅದೇ ಕೇಸ್ ಹಿಯರಿಂಗ್ ಗೆ ಹೋಗಿದ್ದಾಗ ಅವರ ತಲೆ ಕಡಿಯುವ ಬೆದರಿಕೆ ಹಾಕಿದ್ದರು. ಅದೇ ದಿನ ಅವರು ನಾಪತ್ತೆಯಾಗಿದ್ದರು, ಮರು ದಿನ ಅವರ ತಲೆ ಇಲ್ಲದ ದೇಹ ಪತ್ತೆಯಾಯಿತು.

ಸ್ಥಳೀಯ ಪ್ರಬಲ ಜಾತಿಯವರು ಸ್ಥಳೀಯ ನಗರ ಪಾಲಿಕೆ ವಾರ್ಡಿ  ಸಿ ಪಿ ಎಂಎಲ್ ಪಕ್ಷವು ಚುನಾವಣೆಯಲ್ಲಿ ದಲಿತ ಸಮುದಾಯದ ಅಭ್ಯರ್ಥಿಯನ್ನು ನಿಲ್ಲಿಸಿ ಅಲಿಖಿತ ಬಹಿಷ್ಕಾರವನ್ನು ಉಲ್ಲಂಘಿಸಿದ್ದಕಾಗಿ ಸಿಟ್ಟಾಗಿದ್ದರು. ಮಾರಿಯಪ್ಪನ್ ರನ್ನು ಶಿರಚ್ಛೇಧನ ಮಾಡಿದ ನಾಲ್ವರನ್ನು ಬಂಧಸಲಾಗಿದೆ.

ದೇಶಾದ್ಯಂತ ದಲಿತ ಮತ್ತು ಇತರ ದಮನಿತ ಜಾತಿಗಳವರು ವೋಟು ಮಾಡುವ ಮತ್ತು ಸ್ಪರ್ಧಿಸುವ ಅವಕಾಶವನ್ನು ನಿರಾಕರಿಸುವುದು ಸಾಮಾನ್ಯವಾಗಿದೆ. ಅಂಬೇಡ್ಕರ್ ಹೇಳಿದಂತೆ  ಒಬ್ಬ ಮನುಷ್ಯ -ಒಂದು ವೋಟ್ ಮತ್ತು ಒಬ್ಬ ಮನುಷ್ಯ ಒಂದು ಮೌಲ್ಯವೆಂಬ ತತ್ವವನ್ನು ಪ್ರಭಲ ಜಾತಿಗಳವರು ತಮ್ಮ ಜಾತಿಯ ಸಾಮಾಜಿಕ ಮತ್ತು ರಾಜಕೀಯ ಯಜಮಾನಿಕೆಯ ಪ್ರತಿರೋಧವೆಂದು ಭಾವಿಸುತ್ತಾರೆ.

ಪ್ರಬಲ ಜಾತಿಯವರು ಮತ್ತು ಹಿಂದು ಮುನ್ನಣಿಯವರು ದಮನಿತ ವನ್ನಾರ್ ಜಾತಿಯವರು ತಮ್ಮ ರಾಜಕೀಯ ಮತ್ತು ಸಾಮಾಜಿಕ ಹಕ್ಕುಗಳನ್ನು ಪಡೆದುಕೊಳ್ಳುವುದರ ವಿರುದ್ಧ ಎಚ್ಚರಿಕೆಯನ್ನು ನೀಡಿದ್ದಾರೆ. ಅದಕ್ಕೇ ವನ್ನಾರ್ ಜಾತಿಗೆ ಸೇರಿದ ಕಾಮ್ರೇಡ್ ಮರಿಯಪ್ಪನ್ ಅವರನ್ನು ಶಿರಚ್ಚೇಧನೆ  ಮಾಡಲಾಯಿತು.

ಬರ್ಬರ ಶಿರಚ್ಚೇಧನೆ  ಜಾತಿ ವ್ಯವಸ್ಥೆಯ ಸೂಚಕ.  ಪಂಜಾಬಿನಲ್ಲಿ ಅತ್ಯಾಚಾರಕ್ಕೀಡಾದ ಬಿಯಂತ್ ಸಿಂಗ್ ಮಗಳು ಮಾನಭಂಗ ಮಾಡಿದವರ ವಿರುದ್ಧ ನ್ಯಾಯ  ಕೇಳಿದ್ದಕಾಗಿ ನಡೆಸಿದ ಬಿಯಂತ್ ಸಿಂಗ್  ಕೈಕಾಲುಗಳನ್ನು ಕತ್ತರಿಸಿದ ಘಟನೆ ಜ್ಞಾ ಪಕ ಕ್ಕೆ ಈಗ  ಬರುತ್ತದೆ.

ಗುಜರಾತ್ ನಲ್ಲಿ ಗೋರಕ್ಷರ ವಿರುದ್ಧ ದಲಿತರು ನಡೆಸುತ್ತಿರುವ ಪ್ರತಿಭಟನೆಯು ಜಾತಿವಾದಿ- ಕೋಮುವಾದಿ ಸಂಘಟನೆಗಳ ವಿರುದ್ಧ ಕೇಂದ್ರಿಕೃತವಾಗಿದೆ. ಅದೇ ರೀತಿಯಲ್ಲಿ ಕಾಮ್ರೇಡ್ ಮಾರಿಯಪ್ಪನ್ ಅವರ ಕೊಲೆ ಹಳ್ಳಿಗಾಡಿನಲ್ಲಿ ಜಾತಿವಾದಿಗಳ ಮತ್ತು ಹಿಂದುತ್ವವಾದಿಗಳ ಸಂಬಂಧವನ್ನು ಎತ್ತಿ ತೋರಿಸುತ್ತದೆ.

ತಮಿಳುನಾಡಿನಲ್ಲಿ ಜಯಲಲಿತ ಅಧಿಕಾರಕ್ಕೆ ಬಂದ ನಂತರ ಜಾತಿವಾದಿ ಮತ್ತು ಕೋಮುವಾದಿ ಶಕ್ತಿಗಳು ಸ್ವೇಚ್ಛೆಯಿಂದ ಸ್ವಾತಂತ್ರ್ಯ ವನ್ನು ಅನುಭವಿಸುತ್ತಿದ್ದಾರೆ. ದಲಿತೇತರ ಮಹಿಳೆಯರನ್ನು ಮದುವೆಯಾದ ದಲಿತ ಯುವಕರನ್ನು ಸರಣಿಯೋಪಾದಿಯಲ್ಲಿ ಕೊಲ್ಲಲಾಗುತ್ತಿದೆ. ಅಂತಹ ಮದುವೆಯಾದ ಯುವಕರ ಹಳ್ಳಿಗಳ ಲ್ಲಿ ಧಾಳಿಗಳು ನಡೆಯುತ್ತಿವೆ. ವರ್ಷ ಮಾರ್ಚ್ ನಲ್ಲಿ ದಲಿತ ಯುವಕ ಮತ್ತು ಆತನ ಪತ್ನಿಯನ್ನು ನಡು ಹಗಲೇ ಬೀದಿಯಲ್ಲಿ ಖಡ್ಗಗಳಿಂದ ಧಾಳಿ ಮಾಡಲಾಗಿ, ದಲಿತ ಯುವಕ ಸ್ಥಳದಲ್ಲಿಯೇ ಮರಣಹೊಂದಿದನು.  ಅನೇಕ ಜಾತಿವಾದಿ ಸಂಘಟನೆಗಳು ಮತ್ತು ಪಿಎಂಕೆ ಪಕ್ಷಗಳು ಸದರಿ ಕೊಲೆಯನ್ನು ಬೆಂಬಲಿಸಿದ್ದಾರೆ ಮತ್ತು ದಲಿತರು ಮತ್ತು ದಮನಿತ ಜಾತಿಗಳ ವಿರುದ್ಧ ದ್ವೇಷವನ್ನು ಕೆರಳಿಸಿದ್ದಾರೆಆದಾಗ್ಯೂ ಆಳುವ  ಏಡಿ ಎಂ ಕೆ ಮತ್ತು ಡಿ ಎಮ್ ಕೆ ಪಕ್ಷಗಳು ದೌರ್ಜನ್ಯದ ವಿರುದ್ಧ ಮೌನವಾಗಿದ್ದಾರೆ. ಸಂಘಪರಿವಾರ ಮತ್ತು ಹಿಂದು ಮುನ್ನಣಿಯಂತಹ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಉದಾಹರಣೆಗೆ : ಲೇಖಕ ಪೆರುಮಾಳ್ ಮುರುಗನ್ ವಿರುದ್ದ ಹಿಂಸಾತ್ಮಕ ಪ್ರತಿಭಟನೆ ಮಾಡಿದ್ದು. ಲೇಖಕರ ಹಕ್ಕನ್ನು ಇತ್ತೀಚಿಗೆ ಮದ್ರಾಸ್ ಉಚ್ಚನ್ಯಾಯಾ ಎತ್ತಿ ಹಿಡಿಯಿತು. ಹಿಂದುತ್ವ ಮತ್ತು ಜಾತೀವಾದಿ  ಗುಂಪುಗಳು ನಡೆಸುತ್ತಿರುವ  ಸರಣೀ ಬರ್ಬರ ಕೃತ್ಯಗಳು , ಹಿಂದುತ್ವದ ಅಂತ ಸತ್ವವಾದ ಬ್ರಾಹ್ಮಣವಾದ   ಭಾಗವೇ ಆಗಿದೆ.

ಇಂದು ದೇಶಾದ್ಯಂತ ಹಿಂಸಾತ್ಮಕ ಜಾತಿವಾದಿ, ಕೋಮುವಾದಿ ಮತ್ತು ಪಿತೃಉಪ್ರಧಾನ ಸಂಗಟನೆಗಳು- ಗೋ ರಕ್ಷಕ ಗುಂಪುಗಳು, ಹಿಂದು ಮುನ್ನಣಿ , ಜಾತಿವಾದಿ ಸಂಘಟನೆಗಳ   ವಿರುದ್ಧ ಆಕ್ರಮಣಕಾರಿ ಹೋರಾಟಗಳನ್ನು ಆರಂಭಿಸಬೇಕಾಗಿದೆ.  ಅಂತಹ ಸಂಘಟನೆಗಳು ಪ್ರಜಾಸತ್ತಾತ್ಮಕ ಮೌಲ್ಯಗಳ ವಿರುದ್ಧ ಬರ್ಬರ ಧಾಳಿ ಮಾಡಿ ತಪ್ಪಿಸಿಕೊಳ್ಳುವುದಕ್ಕೆ ಅವಕಾಶ ನೀಡಬಾರದು. ಕೇಂದ್ರ ಮತ್ತು ರಾಜ್ಯಗಳಲ್ಲಿ  ಇರುವ ಸರ್ಕಾರಗಳು ಅವುಗಳಗೆ ನೀಡುತ್ತಿರುವ ಹಿಂಬಂದಿಯ ಬೆಂಬಲವನ್ನು ನಿಲ್ಲಿಸಬೇಕು. ಜಾತಿ ವಿನಾಶ ಮಾಡಿ, ಜಾತಿವಾದಿ- ಕೋಮುವಾದಿ ದೌ ರ್ಜನ್ಯಗಳನ್ನು  ಪ್ರತಿರೋಧಿಸಿ.

ಎಂ ಎಲ್ ಅಫ್ ಡೇಟ್- ಸಿಪಿಐ (ಎಂ- ಎಲ್) ಸಾಪ್ತಾಹಿಕ ವಾರ್ತಾಪತ್ರ- ಸಂಪುಟ- 19/ ಸಂಚಿಕೆ- 30. ಜುಲೈ 19-25- 2016>

ಎಂ ಎಲ್ ಅಫ್ ಡೇಟ್ 

ಸಿಪಿಐ (ಎಂ- ಎಲ್) ಸಾಪ್ತಾಹಿಕ ವಾರ್ತಾಪತ್ರ 

ಸಂಪುಟ- 19/ ಸಂಚಿಕೆ- 30. ಜುಲೈ 19-25 2016


ಸಂಪಾದಕೀಯ
ಉನಾ ಅಥವಾ ದದ್ರಿ ನಂತಹ ಅತ್ಯಾಚಾರಗಳು ಇನ್ನು ಕೊನೆಗೊಳ್ಳಲಿ.
ಜಾತಿವಾದಿ ಮತ್ತು ಕೋಮುವಾದಿ : 

ಗೋರಕ್ಷಕ; ದೋಬಿಕೊರರನ್ನು ನಿಷೇದಿಸಿ. 


ಕಳೆದ ಅನೇಕ ವರ್ಷಗಳಿಂದ ಗೋರಕ್ಷಕ  ದೋಬಿಕೋರರು ಜಾತಿವಾದಿ ಮತ್ತು ಕೋಮುವಾದಿ ಹಿಂಸೆಗೆ ಮುಂದಾಗಿದ್ದಾರೆ. ಅಂತಹ ದೊಂಬಿಕೋರರಿಂದರಿಂದಲೇ ದದ್ರಿಯಲ್ಲಿಅಕ್ಲಾಕ್ ಅವರನ್ನು ಕೊಲ್ಲಲಾಯಿತು ಮತ್ತು ಆಂತಹ ದೊಂಬಿಕೋರರೇ ಜಾರ್ಖಂಡ್ ನಲ್ಲಿ ಇಬ್ಬರು ಮುಸ್ಲಿಂ ವ್ಯಾಪಾರಿಗಳನ್ನು ಕೊಂದು ಮರಕ್ಕೆ ನೇಣು ಹಾಕಿದರು.ಆರ್ ಎಸ್ ಎಸ್ ನ ಅಂ ಗ ಸಂಸ್ಥೆಗಳೊಡನೆ ನಿಕಟ ಸಂಬಂಧ ಇಟ್ಟುಕೊಂಡು ಕೆಲಸಮಾಡುತ್ತವೆ. ಅವರುಗಳು ಯಾವಾಗಲೂ ತಮ್ಮ ಬಲಿಪಶುಗಳನ್ನು ನಗ್ನಗೊಳಿಸಿ, ಮೆರವಣಿಗೆ ಮಾಡುವುದಲ್ಲದೆ' ಈ ಘಟನೆಗಳಲ್ಲಿ ಪೋಲೀಸರ ಮುಂದೆಯೇ ಥಳಿಸುತ್ತಾರೆ.ಈ ಹಿಂಸೆಯನ್ನು ಇಂಟರ್ನೆಟ್ ನಲ್ಲೂ ಅಪ್ ಲೋಡ್ ಮಾಡುತ್ತಾರೆ.ಅವರೇ  ಗುಜರಾತಿನ ಸೋಮನಾಥ್ ಜಿಲ್ಲೆಯಲ್ಲೆಯ ಉನಾದಲ್ಲಿ ಮತ್ತೆ ಇದನ್ನೇ ಮಾಡಿದ್ದಾರೆ.

ಪಶುಗಳ ಚರ್ಮವನ್ನು ಸುಲಿದು ಹದ ಮಾಡುವ ಮತ್ತು ಪಶುಗಳ ದೇಹವನ್ನು ಅಂತಿಮ ಗತಿ ಕಾಣಿಸುವ ಕೆಲಸವನ್ನು ಜಾತಿ ವ್ಯವಸ್ಥೆಯು ದಲಿತರಿಗೆ ನಿಯಮಿಸಿದೆ. ಇದು ಕೊಳಕು ಕೆಲವನ್ನು ಅಸ್ಪೃ ಶ್ಯ ರಾದ ದಲಿತರಿಂದಲೇ ಮಾಡಿಸಲಾಗುತ್ತಿದೆ. ಜುಲೈ 11 ರಂದು ರೈತನೊಬ್ಬನು ತನ್ನ ಸತ್ತ ಹಸುವನ್ನು ಗತಿಕಾಣಿಸಲು ನಾಲ್ವರು ದಲಿತರನ್ನು ನೇಮಿಸಿದ್ದನು. ಇವರನ್ನು ಶಿವಸೇನೆಯ ಗೋರಕ್ಷಕ ದೋಂಬಿಕೊರರು ಅಟಕಾಯಿಸಿದರು. ದಲಿತರು ಗೋವಿನ ಚರ್ಮದ ಕಳ್ಳ ಸಾಗಾಣಿಕೆದಾರರು ಎಂದು ಆರೋಪಿಸುತ್ತಾ ದಲಿತರನ್ನು ನಗ್ನಗೊಳಿಸಿ,  ನಾಲ್ಕು ಘಂಟೆಗಳ ಕಾಲ ಥಳಿಸಿ ವೀಡಿಯೋ ರೆಕಾರ್ಡ್ ಮಾಡಿ ಗೋ ಚರ್ಮದ ಕಳ್ಳಸಾಗಾಣಿಗೆದಾರರಿಗೆ ಈ ರೀತಿ ಏಚ್ಚರಿಕೆ ನೀಡಿದರು. ಗುಜರಾತ್ ಪೋಲೀಸರು ಥಳಿಸುವುದನ್ನು ತಡೆದು ಮಧ್ಯಪ್ರವೇಶಿಸಿ  ಆರೋಪಿಗಳನ್ನು ಬಂಧಿಸುವ ಬದಲು ಹಲ್ಲೆಗೀಡಾದವರನ್ನೇ ಪ್ರತಿಬಂಧಿಸಿ ತನಿಖೆಗಾಗಿ ಇರಿಸಿಕೊಂಡಿದ್ದರು. ಈ ಘಟನೆಯು ಉತ್ತರಪ್ರದೇಶದ ದದ್ರಿಯಲ್ಲಿ ದೊಂಬಿಕೋರರಿಂದ ಕೊಲೆಗೀಡಾದ ಅಕ್ಲಾಖ್ ನ ಕುಟುಂಬದವರ ಮೇಲೆ ಎಫ್ ಐ ರ್ ದಾಖಲಿಸಲು ಉತ್ತರಪ್ರದೇಶದ ನ್ಯಾಯಾಲಯವೊಂದು ಆದೇಶಿಸಿರುವುದನ್ನು ನೆನಪಿಸುತ್ತದೆ.

ಈ ದೌರ್ಜನ್ಯದ ವಿರುದ್ಧ ಗುಜರಾತ್ ನ ದಲಿತರು ಪ್ರತಿಭಟನೆಯ ದಾರಿ ಹಿಡಿದಿದ್ದಾರೆ. ಅವರು ಸರ್ಕಾರಿ ಕಚೇರಿಗಳ ಮುಂದೆ  ಪಶುಗಳ ಶವವನ್ನು ತಂದು ಎಸೆಯುವ ನವೀನ ಹೋರಾಟದ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇನ್ನು ಮುಂದೆ ದಲಿತರು ಪಶುಗಳ ಶವವನ್ನು ಗತಿಕಾಣಿಸಲು ನಿರಾಕರಿಸುತ್ತಿದ್ದಾರೆ.ಗೋವನ್ನು ತಮ್ಮ ಮಾತೆಯೆಂದು ಕೊಚ್ಚಿಕೊಳ್ಳುವ  ಆರೆ ಎಸ್ಎಸ್ , ಶಿವಸೇನೆ ಮುಂತಾದ ಗೋರಕ್ಷಕರೇ ತಮ್ಮ ಮಾತೆಯ ಕ್ರಿಯಾ ಕರ್ಮಗಳನ್ನು ಮಾಡಿಕೊಳ್ಳಬೇಕೆಂದು ಹೇಳುತ್ತಿದ್ದಾರೆ. ಈ ಪ್ರತಿಭಟನೆಯ ವಿಧಾನವು ಜಾತಿವಾದಿ ಮತ್ತು ಕೋಮುವಾದಿ ಗೋರಕ್ಷಕ ಗುಂಪುಗಳ ಬೋಳೆತನವನ್ನು ಬಯಲುಗೊಳಿಸುತ್ತಿದೆ. ಅಲ್ಲದೆ, ಇದು ಅವರ ಗೋಮಾತೆ ಹೇಗೆ ಮರಣದ ನಂತರ ಆಕೆಯ ಶವ ಕೊಳಾಕೊಳಕಾಗಿ ಬಿಡುತ್ತದೆ , ಅವಳನ್ನು ಎಕೆ ದಲಿತರು  ಮಾತ್ರವೇ ಮುಟ್ಟಬೇಕಾಗುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ.

ಸುಮಾರು 16 ಜನ ದಲಿತರು ಈ ದೌರ್ಜನ್ಯದ ವನ್ನು ಪ್ರತಿಭಟಿಸಿ ಆತ್ಮಹತ್ಯೆಯ ಪ್ರಯತ್ನ ಮಾಡಿದ್ದಾರೆ.ಇದು ಪ್ರಭುತ್ವದಿಂದ  ಉಂಟಾಗುತ್ತಿರುವ ದೌರ್ಜರ್ನ್ಯದ ವಿರುದ್ಧ ದ ಲಿತರ ಸಿಟ್ಟುಮತ್ತು ಅವಮಾನವನ್ನು ಬಿಂಬಿಸುತ್ತದೆ. ಪ್ರತಿಭಟನೆಯನ್ನು ತಡೆಯಲು ಗುಜರಾತ್ ಸರ್ಕಾರವು ಕೆಲವು ಪೋಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದೆ. ಇದು ಎನೇನೂ ಸಾಲದು. ಆಗಬೇಕಾದದ್ದು ವಿಡಿಯೋದಲ್ಲಿ ಕಂಡು ಬರುವ ವ್ಯಕ್ತಿಗಳನ್ನು ಬಂಧಿಸಿ, ಬೇಜವಾಬ್ದಾರಿ ತೋರಿದ ಪೋಲೀಸರನ್ನು ಸಹ ಬಂಧಿಸಬೇಕು. ಏಕೆಂದರೆ ಪೋಲೀಸರೂ ದಲಿತರ ಮೇಲಿನ ದೌರ್ಜನ್ಯ ಪಾಲುದಾರರು.ಗುಜರಾತ್ ನ ನವಸರ್ಜನ್ ಟ್ರಸ್ಟ್ 2007- 2010 ರಲ್ಲಿ ; ಗುಜರಾತ್ ನ 1589 ಹಳ್ಳಿಗಳಲ್ಲಿ ಸಮಗ್ರ ಅಧ‍್ಯಯನ ಮಾಡಿ ಅಲ್ಲಿನ ಆಚರಣೆಗಳು ಮತ್ತು ಸ್ಥಿತಿಗತಿಗಳ ಬಗ್ಗೆ ವಿವರವಾದ ವರದಿ ನೀಡಿತ್ತು. ಅದು 98% ಗ್ರಾಮಗಳಲ್ಲಿ ವಿಸ್ತಾರವಾದ  ಅಸ್ಪೃ ಶ್ಯತೆಯನ್ನು ಗುರುತು ಮಾಡಿತ್ತು. ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕಂಡುಬರುವ ಅಸ್ಪೃ ಶ್ಯ ಮತ್ತು ದಲಿತ ವಿರೋಧಿ ಮನೋಭಾವ ಗುಜರಾತಿನಲ್ಲಿಯೂ ಕಂಡುಬರುತ್ತದೆ.

ಜಾತಿವಾದಿ ದಲಿತವಿರೋಧಿ ಬೇಧಭಾವ ಮತ್ತು ಹಿಂಸೆಯು ಕೋಮುವಾದಿ ಹಿಂಸೆಯೊಡನೆ ಬಂಧಿಸಲ್ಪಟ್ಟಿದೆ. ಇಂದು ಮುಸಲ್ಮಾನರ ವಿರುದ್ಧ ದ ರಣನೀತಿಗಳು ದಲಿತರ ವಿರುದ್ಧ ಬಹಳ ಕಾಲದಿಂದ ಜಾರಿಯಲ್ಲಿವೆ. ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಸಂಘಟಿತ ಹಿಂಸೆಯ ಗುರಿ ದಲಿತರು ಮತ್ತು ಮುಸ್ಲಿಮರು ಆಗಿದ್ದಾರೆ. ಅವರುಗಳು ಸವರ್ಣೀಯ ಹಿಂದುಗಳು ಹಾಕಿರುವ ಗೋಮಾಂಸ ಭಕ್ಷಣೆಯ ನಿಷೇಧವನ್ನು ಒಪ್ಪುವುದಿಲ್ಲ.ದಲಿತ ಪುರುಷರು ಸವರ್ಣೀಯ ಮಹಿಳೆಯರನ್ನು ಮದುವೆಯಾದರೆ ಹಿಂಸೆ ಎದುರಿಸಬೇಕಾಗುತ್ತ ದೆ. ಅದೇರೀತಿ ಮುಸ್ಲಿಮ್ ಪುರುಷರು ಹಿಂದು ಮಹಿಳೆಯರನ್ನು ಮದುವೆಯಾದಾಗಲೂ ಅಗುತ್ತದೆ.ಇದರ ಅರ್ಥ, ಗೋಹತ್ಯೆ, ಅಂತರ ಜಾತೀಯ ವಿವಾಹ, ಅಂತರ ಧರ್ಮೀಯ ಮದುವೆಗಳು ಜಾತಿ ರಾಜಕೀಯ ಮತ್ತು ಕೋಮುವಾದಿ ರಾಜಕೀಯ ಮತ್ತು ದೊಂಬಿ ಹಿಂಸೆಯ ನೆಪಗಳಾಗುತ್ತವೆ. ಬಿಹಾರದ ಚುನಾವಣೆಗಳಲ್ಲಿ ಇದೇ ಮೋದಿ ಅವರು ಗೋ ರಕ್ಷಣೆಯ ಜಪ ಮಾಡಿ ಕೋಮುವಾದಿ ದ್ವೇಷವನ್ನು ಹಬ್ಬಿಸುವ ಮತ್ತು ಜಾತಿ ಮತ್ತು ಧಾರ್ಮಿಕ ವೋಟ್ ಬ್ಯಾಂಕ್ ಗಳನ್ನು ಗಟ್ಟಿಗೊಳಸುವ ಪ್ರಯತ್ನ ಮಾಡಿದ್ದರು.

ಇಂದು ಬಿಜೆಪಿ ಮತ್ತು ಸಂಘಪರಿವಾರವು ಇಕ್ಕಟ್ಟಿನಲ್ಲಿ ಸಿಕ್ಕಿ  ಬಿದ್ದಿದ್ದಾರೆ. ಒಂದೆಡೆ ಗೋ ರಾಜಕೀಯ   ಮತ್ತು ಜಾತೀಯ ಮತ್ತು ಕೋಮುವಾದಿ ಹಿಂಸೆಯ ಜತೆಜತೆಗೆ ಹೋಗುತ್ತಿದ್ದಾರೆ. ಅದೇ ಸಮಯದಲ್ಲಿ ಅವರು ಮುಸ್ಲಿಮರ ವಿರುದ್ಧ ದ ರಾಜಕೀಯದಲ್ಲಿ ದಲಿತರನ್ನು ಸೆಳೆಯಲು ಪ್ರಯತ್ನಿಸುತ್ತಾರೆ. ಅವರ ಘರ್ ವಾಪಸಿ ಪ್ರಯತ್ನವು ವಾಸ್ತವವಾಗಿ ಹಿಂದುಗಳಾಗಿ ಅವರ ಮೇಲ್ಜಾತಿಯ ದಬ್ಬಾಳಿಕೆಯನ್ನುಯಾವುದೇ ಪ್ರತಿರೋಧವಿಲ್ಲದೆ  ಒಪ್ಪಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಅವರು ರ್ಯಾಡಿಕಲ್  ಆದ ಅಂಬೇಡ್ಕರ್ ಅವರ ಜಾತಿ ವಿರೋಧಿ: ಕೋಮುವಾದಿ ವಿರೋಧಿ ಪ್ರಜಾಸತ್ತಾತ್ಮಕ ರಾಜಕೀಯವನ್ನು ಹೊರತಾದ ಅಂಬೇಡ್ಕರ್ ಅವರನ್ನು ಸ್ವಾಧಿನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಪದೇ ಪದೇ  ಬಿಜೆಪಿ,ಸಂಘ ಮತ್ತು ಹಿಂದುತ್ವ ನಾಯಕರುಗಳು ಮತ್ತು ಗುಂಪುಗಳು ವಾಸ್ತವಾಗಿ ಕುರಿಯ ಚರ್ಮ ಹೊದ್ದ ತೋಳವೆಂದು ದಲಿತರಿಗೆ ಬಯಲಾಗುತ್ತಿದ್ದಾರೆ. ಮೋದಿ ಗುಜರಾತ ನ ಮುಖ್ಯಮಂತ್ರಿಯಾಗಿದ್ದಾಗ, : ಕರ್ಮಯೋಗ: ಎಂಬ ಪುಸ್ತಕವೊಂದನ್ನು ಉಲ್ಲೇಖಿಸುತ್ತಾ: ದಲಿತರು ಕೈನಿಂದ ಮಲ ತೆಗೆಯುವುದನ್ನು ಕರ್ಮಯೋಗವೆಂದು ಬಣ್ಣಿಸಿದ್ದರು.ಇದು ದಲಿತರು ಸ್ವಯಂ ಪ್ರೇರಿತವಾಗಿ ಸಮಾಜಕ್ಕೆ ಮಾಡುವ ಸೇವೆ ಎಂದು ವರ್ಣಿಸಿದ್ದರು. ಬೃಹತ್ ಪ್ರತಿಭಟನೆಯ ನಂತರ ಅವರು ತಮ್ಮ ರಾಗ ಬದಲಿದ್ದರು. ಅವರ ಒರಿಜಿನಲ್ ಹೇಳಿಕೆಗಳು ಸಂಘದ ದಲಿತ ವಿರೋಧಿ ದೌರ್ಜನ್ಯದ  ಸಿದ್ಧಾಂತವನ್ನು ಬಯಲು ಮಾಡುತ್ತದೆ. ಇಂತಹ ಸಾಮಾಜಿಕ ವ್ಯವಸ್ಥೆ ಅವರಿಗೆ ಬೇಕು.

ನರೇಂದ್ರ ಮೋದಿಯ ಮಾದರಿ ಗುಜರಾತಿನಲ್ಲಿದಲಿತರು ನಾಚಿಕೆ ಇಲ್ಲದ ಜಾತಿವಾದಿ,  ಆಡಳಿತ ಮತ್ತು ಸರ್ಕಾರದ ವಿರುದ್ಧ ಬೀದಿಗಿಳಿದಿರುವಾಗಲೇ , ಮುಂಬಯಿಯಲ್ಲಿ ಅಂಬೇಡ್ಕರ್ ಅವರ ಐತಿಹಾಸಿಕ ದಾದರ್ ಮನೆಯನ್ನು ಅಲ್ಲಿನ ಬಿಜೆಪಿ ಸರ್ಕಾರ ಧ್ವಂಸ ಮಾಡಿದುದರ ವಿರುದ್ಧ ದಲಿತರ ಮತ್ತು ಎಡ ಗುಂಪುಗಳ ಬೃಹತ್ ರ್ಯಾಲಿಯನ್ನು ನಡೆಯಿತು. ಗುಜರಾತ್ ನ ದಲಿತರ ಪ್ರತಿಭಟನೆ ದೇಶಾದ್ಯಂತ ಪ್ರಸರಿಸಬೇಕು. ಗೋರಕ್ಷಣೆಯ ಹೆಸರಿನಲ್ಲಿ  ಗುಂಪು ಹಿಂಸೆಯನ್ನು ಹಬ್ಬಿಸುವ ಗೋರಕ್ಷ ದೊಂಬಿಕೋರ ಸಂಸ್ಥೆಗಳನ್ನು ನಿಷೇದಿಸಬೇಕೆಂದು ಪ್ರಜಾಸತ್ತಾತ್ಮಕ ಗುಂಪುಗಳು ಒಗ್ಗೂಡಿ ಒತ್ತಾಯಿಸ.